ಬೆಳ್ತಂಗಡಿ : ತುಳುಟೈಮ್ಸ್ | ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಮಲೆಂಗಲ್ಲು ಉಮಾಮಹೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ.ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು.
ಮಲೆಂಗಲ್ಲು ದೇವಸ್ಥಾನದ ಆಡಳಿತ ಸಮಿತಿ, ಜೀರ್ಣೋದ್ದಾರ ಸಮಿತಿ,ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳ ಸಮ್ಮುಖದಲ್ಲಿ ಧರ್ಮಾಧಿಕಾರಿಗಳು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಮಾರ್ಚ್ ಒಂದರಿಂದ ಆರನೇ ತಾರೀಖಿನವರೆಗೆ ಮಲೆಂಗಲ್ಲು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ.ಪಾರ್ವತಿ ಈಶ್ವರ ಜೊತೆಯಾಗಿ ನೆಲೆಯಾಗಿರುವ ವಿಶೇಷ ಪುರಾತನ ಹಿನ್ನೆಲೆ ಹೊಂದಿರುವ ಕ್ಷೇತ್ರ ಇದಾಗಿದೆ.ಏಕಶಿಲೆಯ ಮೇಲೆ ದೇವರ ಸಾನಿಧ್ಯವಿರುವುದು ಇಲ್ಲಿನ ವಿಶೇಷ.
Malengallu Brahmakalashotsava invitation letter released tulutimes
ಇದನ್ನೂ ಓದಿ : ಆರೋಗ್ಯ : ಸಮರ್ಪಕ ನಿದ್ರೆ ಇಲ್ಲದೆ ಮನಸ್ಸಿಗೆ ಚಿಕಿತ್ಸೆ ಸಂಪೂರ್ಣವಾಗುವುದಿಲ್ಲವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ : https://www.youtube.com/@tulutimess











