ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಡಿಜಿಟಲ್ ಅರೆಸ್ಟ್; 82 ವರ್ಷದ ವ್ಯಕ್ತಿಗೆ 1 ಕೋಟಿ ರೂ. ಪಂಗನಾಮ ಹಾಕಿದ ವಂಚಕರು!

ಕರ್ನಾಟಕ: Tulu Times | ಇತ್ತೀಚೆಗೆ ಡಿಜಿಟಲ್‌ ಅರೆಸ್ಟ್‌ ಅನ್ನೋದು ಹೆಚ್ಚಳವಾಗುತ್ತಿದೆ.  ಎಷ್ಟು ಜಾಗರೂಕತೆಯಿಂದ ಇದ್ದರೂ ಡಿಜಿಟಲ್‌ ಅರೆಸ್ಟ್‌ ವಂಚನೆ ಕೇಸ್‌ ಗಳು ದಿನಂಪ್ರತಿ ದಾಖಲಾಗುತ್ತವೆ.  ಇದೀಗ ವಂಚಕರ ಜಾಲಕ್ಕೆ 82 ವರ್ಷದ ವ್ಯಕ್ತಿ ಬಲಿಯಾಗಿ, 1 ಕೋಟಿ ರೂ. ಕಳೆದುಕೊಂಡಿದ್ದಾರೆ.

ಬಿಹಾರ ಮೂಲದ ಅಪರಾಧಿಗಳ ನಿಯಂತ್ರಣದಲ್ಲಿರುವ ಹಿಮಾಚಲ ಪ್ರದೇಶದ ಎನ್‌ ಜಿ ಓ ಖಾತೆಯ ಮೂಲಕ ವಂಚನೆಗೊಳಗಾದ ಹಣ ಹರಿದು ಬಂದಿದೆ.  ಈ ಯೋಜನೆಯಲ್ಲಿ ಅವರ ಪಾತ್ರಕ್ಕಾಗಿ ಮೂವರನ್ನು ಬಂಧಿಸಲಾಗಿದೆ. ಕಾನೂನು ಜಾರಿ ಅಧಿಕಾರಿಗಳಂತೆ ನಟಿಸುತ್ತಿರುವ ವಂಚಕರಿಗೆ 1.16 ಕೋಟಿ ರೂ.ಗಳನ್ನು ಅವರು ವರ್ಗಾಯಿಸಿದ್ದಾರೆ ಎಂದು ದೆಹಲಿ ಪೊಲೀಸರು ಮಾಹಿತಿ ತಿಳಿಸಿದ್ದಾರೆ.

ಘಟನೆ ನಡೆದದ್ದೇನು..?

ವಂಚಕರು  ವಾಟ್ಸಾಪ್ ವೀಡಿಯೊ ಕರೆಯ ಮೂಲಕ ನಕಲಿ ಬಂಧನ ವಾರಂಟ್ ತೋರಿಸಿ,  ತಕ್ಷಣ ಹಣವನ್ನು ವರ್ಗಾಯಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಬೆದರಿಕೆ ನೀಡಿದ್ದರು. ಇದಕ್ಕೆ ಭಯಗೊಂಡ ಸಂತ್ರಸ್ಥೆ ಹಣ ವರ್ಗಾಯಿಸಿದ್ದಾರೆ.  ಕದ್ದ ಮೊತ್ತದ 1.10 ಕೋಟಿ ರೂ.ಗಳನ್ನು ಹಿಮಾಚಲ ಪ್ರದೇಶದ ‌ ಎನ್‌ ಜಿ ಓ ಒಂದರ ಚಾಲ್ತಿ ಖಾತೆಗೆ ಜಮಾ ಮಾಡಲಾಗಿದೆ. ಈ ಖಾತೆಯನ್ನು ಬಿಹಾರದ ಪಾಟ್ನಾದಲ್ಲಿ ಕಾರ್ಯಕರ್ತರ ಜಾಲವು ನಿಯಂತ್ರಿಸುತ್ತಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ನಲ್ಲಿ ಈ ಒಂದೇ ಖಾತೆಯ ವಿರುದ್ಧ ದಾಖಲಾದ 32 ದೂರುಗಳನ್ನು ಪೊಲೀಸ್ ದಾಖಲೆಗಳು ಬಹಿರಂಗಪಡಿಸಿದೆ.

ಸವಣೂರಿನಲ್ಲಿ ಸ್ಕೂಟರ್ ಅಪಘಾತ; ಮಹಿಳೆಗೆ ಗಂಭೀರ!

ಪ್ರತ್ಯೇಕ ಪ್ರಕರಣಗಳಲ್ಲಿ, ಪುತ್ತೂರಿನ ಸವಣೂರಿನಲ್ಲಿ ಸ್ಕೂಟರ್ ಅಪಘಾತವಾಗಿ ಮಹಿಳೆಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಘಟನೆಯಲ್ಲಿ ಸ್ಕೂಟರ್ ನಲ್ಲಿದ್ದ ನರಿಮೊಗರು ಗ್ರಾಮದ ಪುತ್ತಿಲ ನಿವಾಸಿ, ಪುತ್ತೂರು ವಿಶ್ವಕರ್ಮ ಮಹಿಳಾ ಮಂಡಳಿ ಕಾರ್ಯದರ್ಶಿ ಭವ್ಯ ವಾದಿರಾಜ್ ಗಂಭೀರ ಗಾಯಗೊಂಡಿದ್ದಾರೆ.

ಡಿ.13ರ ರಾತ್ರಿ ಸವಣೂರಿನಲ್ಲಿ ಭವ್ಯ ವಾದಿರಾಜ್ ತನ್ನ ಅಕ್ಕನ ಮಗನೊಂದಿಗೆ ಅನಾರೋಗ್ಯ ಪೀಡಿತ ಮಗುವೊಂದನ್ನು ನೋಡಲು ಸ್ಕೂಟರ್ ನಲ್ಲಿ ಹೋಗುತ್ತಿದ್ದರು, ಈ ವೇಳೆ ಅವರ ಸ್ಕೂಟರ್ ಅಪಘಾತಗೊಂಡಿದೆ. ತೀವ್ರ ಗಾಯಗೊಂಡ ಭವ್ಯ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Digital arrest; 82-year-old man swindled Rs. 1 crore by fraudsters!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page