ಮಂಗಳೂರು – ತುಳು ಟೈಮ್ಸ್: ಪಡುಬಿದ್ರಿ ಹೆದ್ದಾರಿಯಲ್ಲಿ ಬಳಿ ನಡೆದ ಅಪಘಾತದಲ್ಲಿ ಇವೆಂಟ್ ಮಾಲೀಕರೊಬ್ಬರು ನಿಧನರಾಗಿದ್ದಾರೆ. ನಗರದ ಗೌಜಿ ಇವೆಂಟ್ ನ ಮಾಲಕ ಅಭಿಷೇಕ್ ಮೃತಪಟ್ಟ ದುರ್ದೈವಿ.
ಡಿಸೆಂಬರ್ 10 ಬೆಳಗಿನ ಜಾವ 2:20 ರ ಸುಮಾರಿಗೆ ಪಡುಬಿದ್ರಿ ಹೆದ್ದಾರಿಯ ಬಳಿ ಘಟನೆ ಸಂಭವಿಸಿದೆ. ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡ ಅಭಿಷೇಕ್ ಅವರನ್ನು ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅಭಿಷೇಕ್ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಅಪಘಾತದ ತೀವ್ರತೆ ಎಷ್ಟರಿಬಹುದು ಎಂದು ಅಂದಾಜಿಸಬಹುದಾಗಿದೆ. ಅಭಿಷೇಕ್ ಅವರ ಗೌಜಿ ಇವೆಂಟ್ಸ್ ನಡೆಸುತ್ತಿದ್ದರು.
ಇದನ್ನೂ ಓದಿ: ಬೆಂಗಳೂರಿನ ವಾಯು ಮಾಲಿನ್ಯ ನಿಯಂತ್ರಣಕ್ಕೆ ಡಿಕೆಶಿ ತಕ್ಷಣದ ಕ್ರಮ
Abhishek, the well-known owner of Mangaluru-based Gowji Events, died in a tragic road accident on the Padubidri highway in the early hours of Wednesday, December 10. Tulu Times
====================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











