ಚಿಕ್ಕಮಗಳೂರು: Tulu Times l ಕೇರಳ ಮೂಲದ ಕಾಣೆಯಾಗಿದ್ದ ಬಾಲಕಿ ಶ್ರಿನಂದಾ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಾಣಿಕ್ಯಧಾರ ಪ್ರದೇಶದಲ್ಲಿ ನಡೆದಿದೆ. ಮಂಗಳವಾರ ಸಂಜೆ ಸುಮಾರು 6:30ರ ವೇಳೆಗೆ ಶ್ರೀನಂದಾ ಕಾಣೆಯಾಗಿದ್ದಳು. ಆಕೆ ಕೊನೆಯಾಗಿ ಮಾಣಿಕ್ಯಧಾರ ಪ್ರದೇಶದಲ್ಲಿ ಕಂಡುಬಂದಿದ್ದು, ಇದು ತೀವ್ರ ಇಳಿಜಾರುಗಳು ಮತ್ತು ಆಳವಾದ ಕಂದಕಗಳಿಗೆ ಪ್ರಸಿದ್ಧವಾದ ಪರ್ವತ ಪ್ರದೇಶವಾಗಿದೆ.
ಬಾಲಕಿ ಕಾಣೆಯಾಗುತ್ತಿದ್ದಂತೆಯೇ ಪೊಲೀಸರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ದಳ ಸಂಯುಕ್ತವಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದರು. ಕಠಿಣ ಭೌಗೋಳಿಕ ಪರಿಸ್ಥಿತಿಗಳ ನಡುವೆಯೇ ಹಲವು ಗಂಟೆಗಳ ಹುಡುಕಾಟದ ನಂತರ, ಆಕೆಯ ಮೃತದೇಹ ಮಾಣಿಕ್ಯಧಾರ ಪರ್ವತ ಪ್ರದೇಶದ ಆಳವಾದ ಕಂದಕದ ಬಳಿ ಪತ್ತೆಯಾಗಿರುತ್ತದೆ.
ಅಧಿಕಾರಿಗಳ ಪ್ರಕಾರ, ಮೃತದೇಹವು ಸುಮಾರು 1,500 ರಿಂದ 2,000 ಅಡಿ ಆಳದ ಕಂದಕದಲ್ಲಿ ಪತ್ತೆಯಾಗಿದ್ದು, ಅದನ್ನು ಹೊರತೆಗೆದುಕೊಳ್ಳುವುದು ಬಹಳ ಸವಾಲಿನ ಕಾರ್ಯವಾಗಿತ್ತು. ರಕ್ಷಣಾ ತಂಡಗಳು ಆಳವಾದ ಕಣಿವೆಯ ಅಂಚಿನ ಬಳಿ ಮೃತದೇಹವನ್ನು ಗುರುತಿಸಿ ನಂತರ ಯಶಸ್ವಿಯಾಗಿ ಮೇಲಕ್ಕೆ ತರಲಾಗಿದೆ. ಘಟನೆ ಹೇಗೆ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ದುರ್ಘಟನೆ ಪರ್ವತ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯವನ್ನು ಮತ್ತೊಮ್ಮೆ ನೆನಪಿಸುತ್ತದೆ.
Chandradrona Mountain: Body of missing Kerala girl found – ತುಳುಟೈಮ್ಸ್
ಇದನ್ನೂ ಓದಿ :ನರ್ಮದಾ ನದಿಗೆ 11,000 ಲೀಟರ್ ಹಾಲು ಸುರಿದ ಘಟನೆ : ಪರಿಸರ ತಜ್ಞರಿಗೆ ಆತಂಕ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/BXufoj2bV-M?si=kvbJbNlYVJLgwmaz











