ಕರ್ನಾಟಕ: Tulu Times | ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಅದ್ದೂರಿಯಾಗಿ ನಡೆದಿದೆ. ಆದ್ರೆ ಈಗಲೂ ಕೂಡ ಮಾಧ್ಯಮಗಳಲ್ಲಿ ರಿಷಬ್ ಶೆಟ್ಟಿ ಟೀಂಗೆ ಆಮಂತ್ರಣ ಪತ್ರ ಕೊಟ್ಟಿಲ್ವಾ ಅನ್ನೋ ವಿಚಾರ ಹರಿದಾಡುತ್ತಲೇ ಇದೆ. ಇವೆಲ್ಲ ಪ್ರಶ್ನೆಗಳಿಗೆ ರಿಷಭ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ.
ಉದಯಪುರದಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಜೋಡಿ ಹಸೆಮಣೆ ಏರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರ ಮದುವೆಯ ಫೋಟೋಗಳು ವೈರಲ್ ಆಗಿವೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇವರ ಮದುವೆಯ ಫೋಟೋಗಳು ವೈರಲ್ ಮಿಲಿಯನ್ ಗಟ್ಟಲೆ ಟ್ರೆಂಡಿಂಗ್ ನಲ್ಲಿ ವೈರಲ್ ಆಗುತ್ತಿವೆ.
ಆದ್ರೆ, ರಶ್ಮಿಕಾ ಅವರ ಮೊದಲ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಸರ್, ರಶ್ಮಿಕಾ ಮಂದಣ್ಣ ಈಗ ಮದುವೆಯಾಗಿದ್ದಾರೆ, ನಿಮಗೆ ಆಮಂತ್ರಣ ಪತ್ರಿಕೆ ಬಂದಿತ್ತಾ?” ಎಂದು ಪತ್ರಕರ್ತರೊಬ್ಬರು ಕೇಳಿದ ತಕ್ಷಣ ರಿಷಬ್ ಶೆಟ್ಟಿ ನಡೆದುಕೊಂಡ ರೀತಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ತಕ್ಷಣವೇ ರಿಷಬ್ ಶೆಟ್ಟಿ ಯಾವುದೇ ಉತ್ತರ ನೀಡದೆ ಕ್ಷಣಕಾಲ ಮೌನಕ್ಕೆ ಶರಣಾದರು. ಬಳಿಕ ಮುಗುಳ್ನಗುತ್ತಾ ಕೇವಲ “ಥ್ಯಾಂಕ್ಯೂ” ಎಂದು ಹೇಳಿ ಸಂದರ್ಶನದ ಜಾಗದಿಂದ ಅರ್ಧಕ್ಕೇ ಎದ್ದು ನಡೆದರು. ನಟಿ ರಶ್ಮಿಕಾ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುತ್ತಾರೆ. ಬಳಿಕ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Rishab Shetty’s shocking statement about Rashmika Mandanna’s wedding invitation..!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess










