ಮಂಗಳೂರು: Tulu Times | ಮೀನುಗಾರಿಕೆಗೆ ತೆರಳಿದ್ದಾತ ಕೇರಳದ ತ್ರಿಶೂರಿನ ಸುಮೇಶ್ ಎಂಬವರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಡಿ.3ರಂದು ಧಕ್ಕೆ ಬಂದಿದ್ದ ಸುಮೇಶ್ ಅವರು, ಬೋಟ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದರು. ಇವರು ಜ.7ರಂದು ಮಂಗಳೂರಿನ ಮೀನುಗಾರಿಕ ದಕ್ಕೆಯಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ದೋಣಿಯಲ್ಲಿದ್ದರು ಎನ್ನಲಾಗಿದೆ. 28 ಮಂದಿ ಕಾರ್ಮಿಕರೊಂದಿಗೆ ಮೀನುಗಾರಿಕೆಗೆ ತೆರಳಿದ್ದ ಅವರು ಕಾಣೆಯಾಗಿದ್ದಾರೆ.
ಇದನ್ನೂ ಓದಿ: ಮಹಿಳೆಯರು ಆರೋಗ್ಯವಾಗಿರಲು 4 ಸರಳ ಸಲಹೆಗಳು ಇಲ್ಲಿವೆ
ಮೀನುಗಾರಿಕೆಗೆ ತೆರಳಿದ್ದ ವೇಳೆ ಬೂದು ಬಣ್ಣದ ಅರ್ಧ ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಉದ್ದ ಬರ್ಮಡಾ ಧರಿಸಿದ್ದರು. 5.6 ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದಾರೆ. ಈ ವ್ಯಕ್ತಿ ಕಂಡುಬಂದರೆ ಪಾಂಡೇಶ್ವರ ಠಾಣೆಯನ್ನು ಸಂಪರ್ಕಿಸಬೇಕಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮುಂಡಾಜೆಯ ಕಲ್ಮಂಜ- ಧರ್ಮಸ್ಥಳ ರಸ್ತೆಯ ಸಮೀಪ ಬೆಂಕಿ ಅನಾಹುತ
Mangaluru: Man who went fishing goes missing- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











