ಕೊಚ್ಚಿ : Tulu Times l ಕೇರಳ ಹೈ ಕೋರ್ಟ್ ಶುಕ್ರವಾರ ಶಬರಿಮಲೆ ದೇವಸ್ಥಾನದ ಚಿನ್ನ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಮೂಲದ ಸ್ಮಾರ್ಟ್ ಕ್ರಿಯೇಷನ್ಸ್ ಕಂಪನಿಯ ಸಿಇಒ ಪಂಕಜ್ ಭಂಡಾರಿ ಸಲ್ಲಿಸಿದ್ದ ಬಂಧನ ವಿರೋಧಿ ಅರ್ಜಿಯನ್ನು ತಳ್ಳಿಹಾಕಿದೆ.
ಏಕಸದಸ್ಯ ಪೀಠವು ಬಂಧನ ಪ್ರಶ್ನಿಸಿ ಹಾಗೂ ಕಸ್ಟಡಿಯಿಂದ ಬಿಡುಗಡೆ ಕೋರಿ ಭಂಡಾರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದು, ನ್ಯಾಯಾಲಯದ ಸಂಪೂರ್ಣ ಆದೇಶ ಇನ್ನೂ ಹೊರಬರಬೇಕಿದೆ. ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ದ್ವಾರಪಾಲಕ ವಿಗ್ರಹಗಳು ಹಾಗೂ ಗರ್ಭಗುಡಿ ಬಾಗಿಲಿನ ಚಿನ್ನದ ಅಲಂಕಾರ ಕಾರ್ಯಕ್ಕೆ ನೀಡಲಾಗಿದ್ದ ಚಿನ್ನದ ದುರುಪಯೋಗ ನಡೆದಿದೆ ಎಂಬ ಆರೋಪದ ಮೇಲೆ ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿದೆ.
ತನಿಖೆಯ ಪ್ರಕಾರ, ಈ ಪ್ರಕರಣದಲ್ಲಿ ಭಂಡಾರಿ ಮತ್ತು ಬಳ್ಳಾರಿ ಮೂಲದ ಚಿನ್ನಾಭರಣ ವ್ಯಾಪಾರಿ ಗೋವರ್ಧನ್ ರೊದ್ದಂ ಪ್ರಮುಖ ಪಾತ್ರವಹಿಸಿದ್ದರು ಎಂದು ಆರೋಪಿಸಲಾಗಿದೆ.
ಅವರೊಂದಿಗೆ ಮೊದಲ ಆರೋಪಿಯಾಗಿರುವ ಉಣ್ಣಿಕೃಷ್ಣನ್ ಪೊಟ್ಟಿ ಸಹ ಸೇರಿ, ಎಲೆಕ್ಟ್ರೋ ಪ್ಲೇಟಿಂಗ್ ಕೆಲಸಕ್ಕಾಗಿ ಒಪ್ಪಿಸಲಾದ ಚಿನ್ನವನ್ನು ಕಳವು ಮಾಡುವ ಸಂಚು ರೂಪಿಸಿದ್ದರು ಎಂದು ಎಸ್ ಐಟಿ ಹೇಳಿದೆ.
Sabarimala gold theft case: Kerala High Court dismisses CEO’s plea – ತುಳುಟೈಮ್ಸ್
ಇದನ್ನೂ ಓದಿ : ಪಿಕಪ್, ಟಿಪ್ಪರ್ನಲ್ಲಿ ವಿದ್ಯಾರ್ಥಿಗಳ ಸಾಗಣೆ : ಮುಖ್ಯ ಶಿಕ್ಷಕರ ಅಮಾನತು
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/IsWKknFtrrw?si=G2qrRelAKA5vAiij











