ವಿಟ್ಲ:Tulu Times | ಇಂದು ಆಮ್ನಿ ಕಾರು ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೇಪು ಗ್ರಾಮದ ಕುದ್ದುಪದವು-ಪೆರುವಾಯಿ-ಮಾಣಿಲ ರಸ್ತೆಯ ಮುಳಿಯ ಎಂಬಲ್ಲಿ ನಡೆದಿದೆ.
ಇನ್ನು ಮೈರ ಮೋನಪ್ಪ ಕುಲಾಲ್ (65) ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿಮಧ್ಯೆ ಸಾವನ್ನಪ್ಪಿದರು. ಉಳಿದ ಇಬ್ಬರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಮೈರ ಮೂಲದ ಲಲಿತಾ ಕುಲಾಲ್, ರಮಣಿ ಕುಲಾಲ್ ಎಂದು ಗುರುತಿಸಲಾಗಿದೆ.
ಡಿಜಿಟಲ್ ಅರೆಸ್ಟ್: 82 ವರ್ಷದ ವ್ಯಕ್ತಿ ವಂಚಕರು ಪಂಗನಾಮ!
ಪ್ರತ್ಯೇಕ ಪ್ರಕರಣದಲ್ಲಿ, ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಅನ್ನೋದು ಹೆಚ್ಚಳವಾಗುತ್ತಿದೆ. ಎಷ್ಟು ಜಾಗರೂಕತೆಯಿಂದ ಇದ್ದರೂ ಡಿಜಿಟಲ್ ಅರೆಸ್ಟ್ ವಂಚನೆ ಕೇಸ್ ಗಳು ದಿನಂಪ್ರತಿ ದಾಖಲಾಗುತ್ತವೆ. ಇದೀಗ ವಂಚಕರ ಜಾಲಕ್ಕೆ 82 ವರ್ಷದ ವ್ಯಕ್ತಿ ಬಲಿಯಾಗಿ, 1 ಕೋಟಿ ರೂ. ಕಳೆದುಕೊಂಡಿದ್ದಾರೆ. ಬಿಹಾರ ಮೂಲದ ಅಪರಾಧಿಗಳ ನಿಯಂತ್ರಣದಲ್ಲಿರುವ ಹಿಮಾಚಲ ಪ್ರದೇಶದ ಎನ್ ಜಿ ಓ ಖಾತೆಯ ಮೂಲಕ ವಂಚನೆಗೊಳಗಾದ ಹಣ ಹರಿದು ಬಂದಿದೆ. ಈ ಯೋಜನೆಯಲ್ಲಿ ಅವರ ಪಾತ್ರಕ್ಕಾಗಿ ಮೂವರನ್ನು ಬಂಧಿಸಲಾಗಿದೆ. ಕಾನೂನು ಜಾರಿ ಅಧಿಕಾರಿಗಳಂತೆ ನಟಿಸುತ್ತಿರುವ ವಂಚಕರಿಗೆ 1.16 ಕೋಟಿ ರೂ.ಗಳನ್ನು ಅವರು ವರ್ಗಾಯಿಸಿದ್ದಾರೆ ಎಂದು ದೆಹಲಿ ಪೊಲೀಸರು ಮಾಹಿತಿ ತಿಳಿಸಿದ್ದಾರೆ.
ವಂಚಕರು ವಾಟ್ಸಾಪ್ ವೀಡಿಯೊ ಕರೆಯ ಮೂಲಕ ನಕಲಿ ಬಂಧನ ವಾರಂಟ್ ತೋರಿಸಿ, ತಕ್ಷಣ ಹಣವನ್ನು ವರ್ಗಾಯಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಬೆದರಿಕೆ ನೀಡಿದ್ದರು. ಇದಕ್ಕೆ ಭಯಗೊಂಡ ಸಂತ್ರಸ್ಥೆ ಹಣ ವರ್ಗಾಯಿಸಿದ್ದಾರೆ. ಕದ್ದ ಮೊತ್ತದ 1.10 ಕೋಟಿ ರೂ.ಗಳನ್ನು ಹಿಮಾಚಲ ಪ್ರದೇಶದ ಎನ್ ಜಿ ಓ ಒಂದರ ಚಾಲ್ತಿ ಖಾತೆಗೆ ಜಮಾ ಮಾಡಲಾಗಿದೆ. ಈ ಖಾತೆಯನ್ನು ಬಿಹಾರದ ಪಾಟ್ನಾದಲ್ಲಿ ಕಾರ್ಯಕರ್ತರ ಜಾಲವು ನಿಯಂತ್ರಿಸುತ್ತಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ನಲ್ಲಿ ಈ ಒಂದೇ ಖಾತೆಯ ವಿರುದ್ಧ ದಾಖಲಾದ 32 ದೂರುಗಳನ್ನು ಪೊಲೀಸ್ ದಾಖಲೆಗಳು ಬಹಿರಂಗಪಡಿಸಿದೆ.
Omni bus collides with vehicle in Vitla: One person dies on the spot- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











