congress:ಕಾಂಗ್ರೆಸ್ ಸರ್ಕಾರ ಇನ್ನೂ ಅಧಿಕಾರಕ್ಕೆ ಬರುವುದಿಲ್ಲ ಇದುವೇ ಕೊನೆ ಸಿದ್ದರಾಮಯ್ಯ ಆರೋಗ್ಯ ಕ್ಷೀಣಿಸುತ್ತದೆ.ಹೀಗಂತ ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.ಹಾಸನಾಂಬೆ ದೇವಾಲಯಕ್ಕೆ ಭೇಟಿ ಕೊಟ್ಟು ಹಾಸನಾಂಬೆಯ ದರ್ಶನ ಪಡೆದು ಬ್ರಹ್ಮಾಂಡ ಗುರೂಜಿ ಮಾತಾನಾಡಿದ್ರು.ರಾಜ್ಯ ಸರ್ಕಾರದಲ್ಲಿ ಅಧಿಕಾರಕ್ಕೆ ಇನ್ನೂ ಕಿತ್ತಾಟ ಶುರುವಾಗುತ್ತದೆ.
ಮುಂದೆ ಮುಖ್ಯಮಂತ್ರಿ ಆಗುವ ಅವಕಾಶ ಇಬ್ಬರಿಗೆ ಸಿಗುತ್ತದೆ.ಭಾರಿ ಕಾಲೆಳೆಯುವ ಆಟ ಶುರುವಾಗುತ್ತದೆ.ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರುವುದಿದ್ದರೂ ಬೆರಕೆ ಸರ್ಕಾರವಾಗಿ ಬರುತ್ತದೆ.ಈ ಭಾರಿಯೇ ಕೊನೆ ಮತ್ತೆ ಕಾಂಗ್ರೆಸ್ ಬರುವುದಿಲ್ಲ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.ರಾಜ್ಯ ಮತ್ತು ದೇಶದಲ್ಲಿ ಜಲಗಂಡಾಂತರ ಶುರುವಾಗುತ್ತದೆ.ವಿಪರೀತ ಜಲಪ್ರಶಯವಾಗಿ ಭಾರತ ದೇಶವೇ ಇಬ್ಬಾಗವಾಗುತ್ತೆ ಎಂಬ ಹೇಳಿಕೆಯನ್ನು ಬ್ರಹ್ಮಾಂಡ ಗುರೂಜಿ ನೀಡಿದ್ದಾರೆ.
ಹಾಸನಾಂಬೆಯ ದರ್ಶನಕ್ಕಾಗಿ ಬ್ರಹ್ಮಾಂಡ ಗುರೂಜಿ ಆಗಮಿಸಿದ್ರು ಬೇರೇ ಬೇರೆ ಕಡೆಗಳಿಂದ ಹಾಸನಾಂಬೆಯ ದರ್ಶನ ಪಡೆಯುವುದಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ರು.ಹಾಸನಾಂಬೆಯ ದೇವಸ್ಥಾನ ಒಟ್ಟು 11 ದಿನಗಳು ತೆರೆಯಲಿದೆ.
ಇದನ್ನೂ ಓದಿ:Kantara chapter1:ವಿವಾದದಿಂದ ಚಿತ್ರಕ್ಕೆ ಕೋಟಿ ಕೋಟಿ ಲಾಭ!
………………………………………………………………………………………………………………………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಮಾಡಿ,Subscribe ಮಾಡಿ:https://www.youtube.com/@tulutimess











