Belthangady: ನದಿ ದಾಟುತ್ತಿದ್ದ ಕಾರ್ಮಿಕನೋರ್ವ ಮೊಸಳೆಯಿಂದ ಪಾರಾದ ಘಡನೆ ನಡೆದಿದೆ. ಮುಂಡಾಜೆ ಗ್ರಾಮದ ಕಾಯರ್ತೋಡಿ ಕಜೆ ಬಳಿ ಘಟನೆ ನಡೆದಿದೆ.
ಕೆಲಸಕ್ಕೆ ತೆರಳಲು ನದಿ ದಾಟುತ್ತಿದ್ದ ವೇಳೆ ಕಾರ್ಮಿಕನೋರ್ವ ಮೊಸಳೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕಲ್ಮಂಜ ಗ್ರಾಮದ ಹುಣಿಪಾಜೆ ನಿವಾಸಿ ಉಮೇಶ ಅವರು ಮೊಸಳೆ ಯಿಂದ ಪಾರಾದವರು.
ನೇತ್ರಾವತಿ ನದಿ ದಾಟಿ ಕೆಲಸಕ್ಕೆ ಹೋಗಲು ನದಿಗೆ ಇಳಿಯುತ್ತಿದ್ದಂತೆ ದಡದಲ್ಲಿದ್ದ ಮೊಸಳೆ ನೀರಿಗೆ ಹಾರಿದೆ. ಅದನ್ನು ಕಂಡು ಅವರು ಹೆದರಿ ತತ್ ಕ್ಷಣ ನದಿಯಿಂದ ಮೇಲ್ಬಾಗಕ್ಕೆ ಓಡಿ ತಪ್ಪಿಸಿಕೊಂಡರು ಎನ್ನಲಾಗಿದೆ.
ನದಿ ದಡದ ಪೊದೆಗಳ ಮಧ್ಯೆ ಮೊಸಳೆ ಇದ್ದುದು ಇವರ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: Kukke Subrahmanya: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪುವ ಬೆಳ್ಳಿರಥದ ವಿಶೇಷತೆಗಳೇನು ಗೊತ್ತಾ..?
=====================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್: https://www.youtube.com/@tulutimess











