ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಂದು ನಡೆಯಬೇಕಾಗಿದ್ದ ವಿಚಾರಣೆಯನ್ನು ಮುಂದೂಡಲಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಆರೋಪಿ ನಟ ದರ್ಶನ್ ಹಾಗೂ ಗ್ಯಾಂಗ್ ಹತ್ಯೆ ಮಾಡಿತ್ತು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ದೇಷಾರೋಪ ನಿಗದಿ ಪಡಿಸುವ ಸಂಬಂಧ ವಿಚಾರಣೆ ನಡೆಯಬೇಕಾಗಿತ್ತು. ಆದ್ರೆ 64ನೇ ಸಿಸಿಎಚ್ ನ್ಯಾಯಾಲಯ ಜಾರ್ಜ್ ಫ್ರೇಮ್ ಅನ್ನು ಮುಂದೂಡಿದೆ.
ನವೆಂಬರ್ 10ಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಲಾಗಿದೆ. ಈ ವೇಳೆ ಜಡ್ಜ್ ಚೇಂಬರ್ನಲ್ಲೇ ವಿಚಾರಣೆಗೆ ವಕೀಲರು ಮನವಿ ಮಾಡಿದ್ದಾರೆ. ನಟ ದರ್ಶನ್ ಅವರನ್ನು ಕಾಣಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ದರ್ಶನ್ ಹಣೆಗೆ ತಿಲಕವಿಟ್ಟು ಆಗಮಿಸಿದ್ದರು. ಜೊತೆಗೆ ಪ್ರಮುಖ ಆರೋಪಿಗಳನ್ನೂ ಕೋರ್ಟ್ಗೆ ಕರೆತರಲಾಗಿತ್ತು
ಪ್ರಮುಖಾಂಶಗಳು
- ದರ್ಶನ್ & ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ
- ನಂ. 10 ವಿಚಾರಣೆ ಮುಂದೂಡಿದ ನ್ಯಾಯಾಲಯ
- ವಿಚಾರಣೆ ಮುಂದೂಡಿದ್ರೂ ಕಡಿಮೆಯಾಗದ ಜನದಟ್ಟನೆ
- 64ನೇ ಸಿಸಿಎಚ್ ನ್ಯಾಯಾಲಯದಿಂದ ಮುಂದೂಡಿಕೆ
- ಹಣೆಯಲ್ಲಿ ಕುಂಕುಮ ಧರಿಸಿ ಬಂದ ನಟ
ಇದನ್ನೂ ಓದಿ: Bangalore : ಡಾ. ಮಹೇಂದ್ರ ರೆಡ್ಡಿಯ ಫೋನ್ ಪೇ ಚಾಟಿಂಗ್ ರಹಸ್ಯ ಬಯಲು : ಸ್ನೇಹಿತೆ ಜೊತೆ ಚಾಟಿಂಗ್
===================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SDL5CAMpIQ0?si=MjdrEqd9L9xZirpC











